ಸಾಲಕ್ಕೆ ಮನನೊಂದು ಮಹಿಳೆ ನೇಣಿಗೆ ಶರಣು
ಕಂಪ್ಲಿ : ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಚಪ್ಪರದಳ್ಳಿ ನಗರದ ನಿವಾಸಿಯಾಗಿದ್ದ ಪ್ಯಾರಿ ಬೇಗಂ ಎಂಬುವವರು ನಿನ್ನೆ ಬೆಳಿಗ್ಗೆ 11:30 ಸುಮಾರಿಗೆ ನೇಣು ಬೀಗಿದುಕೊಂಡು ಮೃತಪಟ್ಟಿದ್ದಾರೆ.
ಮನೆ ಸಂಸಾರಕ್ಕಾಗಿ ಹಲವಾರು ಕಡೆಗಳಲ್ಲಿ ಸಾಲ ಮಾಡಿಕೊಂಡು, ಸಾಲದ ಹಣವನ್ನು ಹಿಂತಿರುಗಿಸಲಾಗದೇ ಸಾಲದ ಬಾದೆಗೆ ಮನನೊಂದು ದುಪ್ಪಟ(ವೇಲು)ದಿಂದ ಮನೆಯ ಮೇಲ್ಚಾವಣಿಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಇದಕ್ಕೆ ಸಂಬಂದಿಸಿದಂತೆ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಘುವೀರ್, ಸಿದ್ದಿ ಟಿವಿ, ಕಂಪ್ಲಿ