Sindhanuru: ನಮ್ಮ ಮತ ನಮ್ಮ ಹಕ್ಕು ಎಂಬ ಧ್ಯೇಯ ವಾಕ್ಯದ ಪ್ರತಿಜ್ಞೆ ವಿಧಿ ಬೋಧನೆ


ನಮ್ಮ ಮತ ನಮ್ಮ ಹಕ್ಕು ಎಂಬ ಧ್ಯೇಯ ವಾಕ್ಯದ ಪ್ರತಿಜ್ಞೆ ವಿಧಿ ಬೋಧನೆ

ರಾಯಚೂರು ಜಿಲ್ಲೆಯ, ಸಿಂಧನೂರು ತಾಲೂಕಿನ ಕುರುಕುಂದ ಗ್ರಾಮದ ಆಂಜನೇಯ ಗುಡಿ ಹತ್ತಿರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಅಂಗವಾಗಿ ಮತದಾರರಿಗೆ ಮತದಾನದ ಮಹತ್ವವನ್ನು ಅರಿಯಲು ಸ್ವಿಪ್ ಚಟುವಟಿಕೆಯಡಿ ಮತದಾರರ ಪ್ರತಿಜ್ಞೆ ವಿಧಿ ಬೋಧಿಸಲಾಯಿತು. 

ಗ್ರಾಮದ ಎಲ್ಲಾ ಬೀದಿಗಳಲ್ಲಿ ಜಾಥಾ ಮಾಡಲಾಯಿತು, ನಂತರ ಕಡ್ಡಾಯವಾಗಿ ಮತದಾರರು ಮೇ ೧೦ ರಂದು ನಡೆಯುವ ಮತದಾನದಲ್ಲಿ ತಪ್ಪದೆ ಮತಚಲಾಯಿಸುವಂತೆ ತಿಳಿ ಹೇಳಲಾಯಿತು.

ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ISRA ತಂಡದ ಶಾಂತಮತ್ತಯ್ಯ, ಮಾತನಾಡಿ ಕಳೆದ ಬಾರಿ 65% ಮಾತ್ರ ಮತದಾನ ಆಗಿದ್ದು ಅದನ್ನು ನಾವು ಎಲ್ಲರು ಸೇರಿ ಈ ಬಾರಿ ಅತಿ ಹೆಚ್ಚು ಮತದಾನ  ಆಗಲು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ, ಎಲ್ಲಾ ಜನರು ಖಡ್ಡಾಯವಾಗಿ *ನಮ್ಮ ಮತ ನಮ್ಮ ಹಕ್ಕು* ಎನ್ನುವ ಧ್ಯೇಯ ವಾಕ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.

 ಗ್ರಾಮ ಪಂಚಾಯತಿಯ PDO ಶ್ರೀಮತಿ ದೀಪಾ, ಸಿಬ್ಬಂದಿಗಳಾದ ಅಮರೇಶ್, ಮತ್ತು ನೀರು ಗಂಟಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ರಿಪೋರ್ಟರ್  : ಮೆಹಬೂಬ ಮೋಮಿನ

Previous Post Next Post

Contact Form

f="https://unpkg.com/video.js/dist/video-js.css" rel="stylesheet">