ಕಂಪ್ಲಿ : ಡಾ APJ ಅಬ್ದುಲ್ ಕಲಾಂ ಟ್ರಸ್ಟ್ ವತಿಯಿಂದ ಕಲಾಂ ರ ಜನ್ಮದಿನಾಚರಣೆ


 ಡಾ ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ನ ನೂತನ ಅಧ್ಯಕ್ಷ ಅಕ್ಕಿ ಜಿಲಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ. ಎ.ಪಿ.ಜೆ. ಅಬ್ದುಲ್‌ ಕಲಾಂ ಅವರು ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿ ಎತ್ತಿ ಹಿಡಿದ್ದಾರೆ. ಬಲಿಷ್ಠ ರಾಷ್ಟ್ರಗಳ ಜತೆ ಭಾರತ ಪೈಪೋಟಿ ನಿಡುವಷ್ಟ್ರರ ಮಟ್ಟಿಗೆ ಭಾರತವನ್ನು ಬೆಳೆಸಿದ ಕೀರ್ತಿ ಅವರದು. ಅದಕ್ಕೆ ಅಬ್ದುಲ್‌ ಕಲಾಂ ಅವರ ಪರಿಶ್ರಮ ಕಾರಣ ಇಂದಿನ ಯುವ ಪೀಳಿಗೆ ಅವರ ಆದರ್ಶ ಮತ್ತು ದೇಶ ಭಕ್ತಿಯನ್ನು ಮೈಗೂಡಿಸಿಕೊಂಡು ದೇಶ ರಕ್ಷ ಣೆಯಲ್ಲಿ ತಮ್ಮನ್ನು ತೊಡಗಿಕೊಳ್ಳಬೇಕೆಂದರು. ಅವರ ಈ ದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನಾಚರಣೆಯನ್ನಾಗಿ ಅಚರಿಸಲಾಗುತ್ತದೆ ಎಂದು ತಿಳಿಸಿದರು.

ನಂತರ ನಿವೃತ್ತ ಶಿಕ್ಷಕ ಮೊಹಮ್ಮದ ಹನೀಪ ಜೆಸಿಐ ಕಂಪ್ಲಿ ಸೋನಾ ದ ಅಧ್ಯಕ್ಷ ಜೆಸಿ ಸಂತೋಷ ಸೋಗಿ, ಅರೋಗ್ಯ ಇಲಾಖೆಯ ಎನ್ ಚೆನ್ನಬಸವರಾಜ್ ಹಾಗೂ ಫಾರ್ಮಸಿ ಅಧಿಕಾರಿ ಎಚ್ ಎ ಶಿವರುದ್ರಪ್ಪ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಅರೋಗ್ಯ ಇಲಾಖೆಯ  NCD ಕೌನ್ಸಲರ್ ಮಹಮ್ಮದ ಟ್ರಸ್ಟ್ ನ ಗೌರವ ಅಧ್ಯಕ್ಷ ಹುಮೇಶ್ ಸಾಹೇಬ್, ಸಂಚಾಲಕ ಬಡಿಗೇರ್ ಜಿಲಾನ್, ಉಪಾಧ್ಯಕ್ಷರಾದ  ಎಸ್ ಕೆ ಇಂತೀಯಾಜ್, ಆರ್ ಸುಭಾನ್, ಎ ಎಸ್ ಯಲಪ್ಪ, ಖಜಾಂಚಿ ಎಚ್ ನಿಸಾರ್, ಪದಾಧಿಕಾರಿಗಳಾದ ಆರ್ ಜಿಲಾನ್ ಎನ್ ಅಕ್ಬರ್,  ಮೌಲಾ ಹುಸೇನ್, ಶರಣಯ್ಯ ಸ್ವಾಮಿ, ಕೋಟೆ ಕಾರ್ತಿಕ, ಬಡಿಗೇರ ನೂರಾಬಾಷಾ ಮಾಳ್ಗಿ ಸಂತೋಷ, ತೌಫಿಕ, ಜೆ ವಿರೇಶ, ಅನಿಲಕುಮಾರ, ರಮೇಶ, ನಿಂಗರಾಜ ಸೇರಿದಂತೆ ಅನೇಕರು ಇದ್ದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">