ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮ
ಕಂಪ್ಲಿ : ಕಂಪ್ಲಿ ತಾಲೂಕಿನ ನಂ.10ಮುದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಂಚಮ್ಮ ದೇವಿ ದೇವಸ್ಥಾನದ ಬಳಿ ಇಂದು ಪ್ರಾಥಮಿಕ ಆರೋಗ್ಯ ಕೇಂದ್ರ ರಾಮಸಾಗರ, ಗ್ರಾಮ ಪಂಚಾಯತಿ ಮುದ್ದಾಪುರ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಇನ್ನೂ ಈ ಶಿಬಿರದಲ್ಲಿ ಸ್ಥಳೀಯ ಜೈಭೀಮ್ ಬಳಗದ ಯುವಕರು ಹಾಗೂ ಗ್ರಾಮದ ಸುಮಾರು30ಕ್ಕೂ ಹೆಚ್ಚು ಜನ ಈ ಶಿಬಿರದಲ್ಲಿ ಭಾಗಿಯಾಗಿ ರಕ್ತದಾನ ಮಾಡಿದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷ ಪರಶುರಾಮ, ಗೋಪಾಲ, ಯಲ್ಲಪ್ಪ ಹಾಗೂ ಯುವಕರು ಭಾಗಿಯಾಗಿದ್ದರು.
Tags
ಟಾಪ್ ನ್ಯೂಸ್