ಸೋಮಪ್ಪನ ಕೆರೆಗೆ ಜಲಕಮಲದ ಆಕ್ರಮಣ, ಮಾಲಿನ್ಯದಿಂದ ಪರಿಸರಕ್ಕೆ ಅಪಾಯ
ಕಂಪ್ಲಿ ಪಟ್ಟಣದ ಪ್ರಮುಖ ಕೆರೆಯಾಗಿರುವ ಸೋಮಪ್ಪನ ಕೆರೆ ಇದೀಗ ಜಲಕಮಲದ ಆಕ್ರಮಣದಿಂದ ಸಂಕಷ್ಟಕ್ಕೆ ಸಿಲುಕಿದೆ. ಕೆರೆಯ ಬಹುಪಾಲು ಭಾಗ ನೀರಿನಲ್ಲಿ ತೇಲಿ ಹರಡಿರುವ ಜಲಕಮಲದಿಂದ ಆಕರ್ಷಣೆ ಶಕ್ತಿ ಕುಂದಿದೆ ಮತ್ತು ಜಲಚರ ಜೀವಿಗಳ ಸಂಚಾರಕ್ಕೆ ತೊಂದರೆಯಾಗಿದೆ.
ಇದೇ ಸಂದರ್ಭದಲ್ಲಿ, ಕೆರೆದಂಡೆಯಲ್ಲಿ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯ ವಸ್ತುಗಳು ಕಾಣಿಸುತ್ತಿದ್ದು, ಇದರಿಂದ ಜಲಮಾಲಿನ್ಯ ಹೆಚ್ಚುತ್ತಿದೆ. ಸ್ಥಳೀಯ ನಾಗರಿಕರು ಮತ್ತು ಪರಿಸರ ಹಿತಚಿಂತಕರು ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸೋಮಪ್ಪನ ಕೆರೆ ಶುದ್ಧೀಕರಣ ಹಾಗೂ ಸಂರಕ್ಷಣೆಗೆ ಪುರಸಭೆ ಹಾಗೂ ಜಲಸಂಪತ್ತು ಇಲಾಖೆ ತ್ವರಿತ ಕ್ರಮ ಕೈಗೊಳ್ಳುವುದು ಅತ್ಯವಶ್ಯಕವಾಗಿದೆ.