Kukanuru - ಇಂಜಿನಿಯರ್ ಗೆ ಕ್ಲಾಸ್ ತೆಗೆದುಕೊಂಡ ಸಚಿವ ಹಾಲಪ್ಪ ಆಚಾರ್

ಇಂಜಿನಿಯರ್ ಗೆ  ಕ್ಲಾಸ್ ತೆಗೆದುಕೊಂಡ  ಸಚಿವ ಹಾಲಪ್ಪ ಆಚಾರ್
ಕೊಪ್ಪಳ, ಕುಕನೂರು:
ಕಳಪೆ ಕಾಮಗಾರಿ ಕಂಡು ಮಹಿಳಾ ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಅವರು ನೀನೇನಾ ಇಂಜಿನಿಯರ್, ಹೀಗೆನಾ ಕೆಲಸ ಮಾಡೋದು ಎಂದು ಇಂಜಿನಿಯರ್ ಗೆ ಚಳಿ ಬಿಡಿಸಿದ್ದಾರೆ.
ನೂತನ ಶಾಲಾ ಕಟ್ಟಡದ ಉದ್ಘಾಟನೆ ವೇಳೆ ಕೆ ಆರ್ ಐ ಡಿ ಎಲ್ ಇಲಾಖೆಯ ಇಂಜಿನಿಯರ್ ಮೇಲೆ ಕಾಮಗಾರಿಯ ಗುಣಮಟ್ಟ ಕಂಡು ಸಚಿವ ಹಾಲಪ್ಪ ಆಚಾರ್ ಅವರು ಸಿಟ್ಟಾದರು.
ಕುಕನೂರು ತಾಲೂಕಿನ ರಾವಣಕಿಯಲ್ಲಿ ನೂತನ ಪ್ರೌಢಶಾಲಾ ಕಟ್ಟಡ ವೇಳೆ ಇಂಜಿನಿಯರ್ ಮೇಲೆ ಸಿಟ್ಟಾದ ಹಾಲಪ್ಪ ಆಚಾರ್

ಅವೈಜ್ಞಾನಿಕ ಕಾಮಗಾರಿ ಕಂಡು ಸಚಿವ ಹಾಲಪ್ಪ ಆಚಾರ್ ನಿನ್ನ ಮನೆಯ ಕೆಲಸ ಆಗಿದ್ದರೆ ಹೀಗೆ ಮಾಡುತ್ತಿದ್ದೀಯಾ ಎಂದು ಕೇಳಿದ ಸಚಿವರ ಮಾತಿಗೆ ತಲೆ ತಗ್ಗಿಸಿದ ಇಂಜಿನಿಯರ್
ಯಲಬುರ್ಗಾ ಶಾಸಕ, ಸಚಿವ ಹಾಲಪ್ಪ ಆಚಾರ್ ಅವರಿಂದ ಕುಕನೂರು ಯಲಬುರ್ಗಾ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ, ಭೂಮಿ ಪೂಜೆ ಕಾರ್ಯಕ್ರಮಗಳು ನಡೆದವು.

ವರದಿ : ಈರಯ್ಯ ಕುರ್ತಕೋಟಿ
Previous Post Next Post

Contact Form

f="https://unpkg.com/video.js/dist/video-js.css" rel="stylesheet">