ನಗರದಲ್ಲಿ ಯುವಕನ ಭಯಾನಕ ಕೊಲೆ
ಪಟ್ಟಣದ ***** ಬಳಿ ಮೇ 15, ಗುರುವಾರ ತಡರಾತ್ರಿ ಸುಮಾರು 12:30ರ ಸುಮಾರಿಗೆ ಯುವಕನೊಬ್ಬ ಹತ್ಯೆಯಾದ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಮಾಹಿತಿ ಮೇರೆಗೆ ಪೊಲೀಸ್ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯುವಕನ ತಲೆ ಮೇಲೆ ಭಾರಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಮೃತ ವ್ಯಕ್ತಿಯನ್ನು ಆಂಧ್ರ ಪ್ರದೇಶದ ನದಿಚಾಗಿ ಮೂಲದ ವ್ಯಕ್ತಿ ಎಂದು ಪೊಲೀಸರು ಗುರುತಿಸಿದ್ದಾರೆ.
ಹತ್ಯೆಯ ಕಾರಣ ತಿಳಿದುಬರಬೇಕಿದ್ದು, ಘಟನೆಯ ಹಿಂದಿನ ಹಿನ್ನೆಲೆ ಉದ್ದೇಶಿತವಾಗಿದೆಯೋ ಅಥವಾ ವೈಯಕ್ತಿಕ ವೈಷಮ್ಯವೋ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Due to Technical issues and Google Guidelines so we can't spread visuals &More
Related News :