Kampli : ಮಂಗಳಮುಖಿ ರಾಜಮ್ಮಗೆ ಕೆಎಸ್ಪಿಸಿಎ ಸದಸ್ಯ ಮೋಹನ್ ಕುಮಾರ್ ದಾನಪ್ಪರಿಂದ ಸನ್ಮಾನ


ಮಂಗಳಮುಖಿ ರಾಜಮ್ಮಗೆ ಕೆಎಸ್ಪಿಸಿಎ ಸದಸ್ಯ ಮೋಹನ್ ಕುಮಾರ್ ದಾನಪ್ಪರಿಂದ ಸನ್ಮಾನ!

ಕಂಪ್ಲಿ, ಜುಲೈ 12: ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಸುಗ್ಗೇನಹಳ್ಳಿ ಗ್ರಾಮದ ನಿವಾಸಿ ಮಂಗಳಮುಖಿ ಪಿ. ರಾಜಮ್ಮ ಅವರು ಭಿಕ್ಷೆ ಬೇಡಿದ ಉಳಿತಾಯದ ಹಣದಿಂದ ಸಮಾಜಮುಖಿ ಕೆಲಸವನ್ನೂ ಮಾಡಿರುವ ಉದಾತ್ತ ಮನಸ್ಸಿನ ವ್ಯಕ್ತಿಯಾಗಿ ಗುರುತಿಸಲ್ಪಟ್ಟಿದ್ದಾರೆ.

ಇತ್ತೀಚೆಗೆ ಅವರು ಸರಕಾರಿ ಶಾಲೆಗಳ 150 ಮಕ್ಕಳಿಗೆ ರೂ. 60,000 ಮೌಲ್ಯದ ಸಮವಸ್ತ್ರ, ಟೀ-ಶರ್ಟ್, ಪ್ಯಾಂಟ್‌ಗಳನ್ನು ನೀಡಿದ್ದು, 2023 ರಲ್ಲಿ ಸುಗ್ಗೇನಹಳ್ಳಿ ಸರ್ಕಾರಿ ಶಾಲೆಯ ಎಲ್ಲಾ ಮಕ್ಕಳಿಗೆ ರೂ. 20,000 ಮೌಲ್ಯದ ಬಟ್ಟೆಗಳನ್ನೂ ದಾನವಾಗಿ ನೀಡಿದ್ದಾರೆ.

ಅವರ ಈ ಪರೋಪಕಾರಿ ಕಾರ್ಯವನ್ನು ಗುರುತಿಸಿದ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಅವರು ಅವರನ್ನು ಸನ್ಮಾನಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಿದ್ದಾರೆ.

ಅಭಿನಂದನಾ ಪತ್ರದ ಮುಖ್ಯ ಅಂಶಗಳು:

  • ರಾಜಮ್ಮ ಅವರು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು.
  • ಭಿಕ್ಷಾಟನೆಯ ಜೀವನವನ್ನು ನಂಬಿಕೊಂಡು ಸಹ ಮನುಷ್ಯತ್ವವನ್ನು ಮರೆತಿಲ್ಲ.
  • ಸ್ವಂತ ವಿದ್ಯಾಭ್ಯಾಸದ ಆಸೆಯನ್ನೂ ನಿರಾಕರಿಸಿಕೊಂಡು, ಇಂದಿನ ಮಕ್ಕಳಿಗೆ ಶಿಕ್ಷಣಕ್ಕೆ ನೆರವಾಗುವ ಕೆಲಸ ಮಾಡಿದ್ದಾರೆ.
  • ಬಡ ಮಕ್ಕಳಿಗೂ ತಾವು ಚಂದವಾಗಿ ಕಾಣಬೇಕು ಎಂಬ ಉದ್ದೇಶದಿಂದ ಸಮವಸ್ತ್ರ ನೀಡಿರುವುದು ಶ್ಲಾಘನೀಯ.
  • ಈ ಕಾರ್ಯದಿಂದ ತೃತೀಯ ಲಿಂಗ ಸಮುದಾಯದ ಮೇಲೆ ಸಮಾಜದ ದೃಷ್ಟಿಕೋನ ಬದಲಾಗುತ್ತಿದೆ.

ಮೋಹನ್ ಕುಮಾರ್ ದಾನಪ್ಪ ಅವರು rajamma ಅವರ ಈ ಮಾನವೀಯತೆಗೆ ಶಲಾಕ್ ಹೋಗಿ, ಅವರ ಆರೋಗ್ಯ ಹಾಗೂ ಆಯುಷ್ಯ ವೃದ್ಧಿಯಾಗಲೆಂದು ಹಾರೈಸಿದರು.

— Siddi TV ಸುದ್ದಿ ಸೇವೆ

Previous Post Next Post

Contact Form

f="https://unpkg.com/video.js/dist/video-js.css" rel="stylesheet">