Kampli : 4ನೇ ವಾರ್ಡ್ ನ ಪುರಾತನ ಬಾವಿ ಸ್ವಚ್ಛತೆಗೆ ಆಗ್ರಹ

ಕಂಪ್ಲಿ – 4ನೇ ವಾರ್ಡ್ ಪುರಾತನ ಬಾವಿ ಸ್ವಚ್ಛಗೊಳಿಸಬೇಕೆಂದು ಆಗ್ರಹ
Siddi TV – E News
ಕಂಪ್ಲಿಆಗಸ್ಟ್ 25, 2025 · ಮಧ್ಯಾಹ್ನ 1:00

ಕಂಪ್ಲಿ – 4ನೇ ವಾರ್ಡ್ ಪುರಾತನ ಬಾವಿ ಸ್ವಚ್ಛಗೊಳಿಸಬೇಕೆಂದು ಆಗ್ರಹ

ವರದಿ: Siddi TV ವರದಿಗಾರ ಸ್ಥಳ: 4ನೇ ವಾರ್ಡ್, ಬಸವೇಶ್ವರ ನಗರ, ಕೆಂಚಮ್ಮ ದೇವಾಲಯ ಪಕ್ಕ

ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ 4ನೇ ವಾರ್ಡ್ ಬಸವೇಶ್ವರ ನಗರದಲ್ಲಿರುವ ಕೆಂಚಮ್ಮ ದೇವಾಲಯದ ಪಕ್ಕದ ಪುರಾತನ ಬಾವಿ ಹಲವು ವರ್ಷಗಳಿಂದ ಪಾಳು ಬಿದ್ದಿದ್ದು, ಅಸುರಕ್ಷಿತ ಸ್ಥಿತಿಗೆ ತಲುಪಿದೆ.

ಈ ಹಿನ್ನೆಲೆಯಲ್ಲಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ರುದ್ರಮುನಿ ಅವರ ನೇತೃತ್ವದಲ್ಲಿ ಸಂಘದ ಸದಸ್ಯರು ಪುರಸಭೆಗೆ ಮನವಿ ಸಲ್ಲಿಸಿ, ತಕ್ಷಣ ಸ್ವಚ್ಛಗೊಳಿಸುವಂತೆ ಆಗ್ರಹಿಸಿದರು.

ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಅವರು, “ಬಾವಿಯನ್ನು ಆದಷ್ಟು ಬೇಗ ಸ್ವಚ್ಛಗೊಳಿಸಲಾಗುವುದು. ಪುರಾತನ ಬಾವಿ, ಶಾಸನಗಳು ಮತ್ತು ಇತಿಹಾಸಿಕ ಸ್ಥಳಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ,” ಎಂದು ತಿಳಿಸಿದರು.
ಕಂಪ್ಲಿ ಪುರಾತನ ಬಾವಿ ಸ್ವಚ್ಛತಾ ಅಭಿಯಾನ Ambedkar ಸಂಘ
© 2025 Siddi TV
Previous Post Next Post

Contact Form

f="https://unpkg.com/video.js/dist/video-js.css" rel="stylesheet">