ಸಿಂಧನೂರು ನಗರಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸ್ವಾಗತ ಕೋರಿದ ಡಾ.ನಾಗವೇಣಿ.
ಸಿಂಧನೂರು ತಾಲೂಕಿಗೆ ಪ್ರಥಮ ಬಾರಿ ಆಗಮಿಸಿದ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣು ಪ್ರಕಾಶ್ ಪಾಟೀಲ್ ಅವರಿಗೆ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಡಾ// ನಾಗವೇಣಿ ಸನ್ಮಾನಿಸಿ ಸ್ವಾಗತಿಸಿಕೊಂಡರು.
ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೆ ಬಂದ ನಂತರ ರಾಯಚೂರು ಜಿಲ್ಲಾ ಸಚಿವರನ್ನಾಗಿ ಡಾ. ಶರಣ್ ಪ್ರಕಾಶ್ ಪಾಟೀಲರನ್ನು ಸರಕಾರ ನೇಮಕ ಮಾಡಿದ್ದು ಸಚಿವರು ಸಿಂಧನೂರು ನಗರಕ್ಕೆ ಪ್ರಥಮ ಬಾರಿಗೆ ಆಗಮಿಸಿದವರನ್ನು ಡಾ. ನಾಗವೇಣಿ ಅವರು ಸನ್ಮಾನಿಸಿದರು.
ನಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣು ಪ್ರಕಾಶ್ ಪಾಟೀಲ್ ಅವರು ಸಿಂಧನೂರು ನಗರದಲ್ಲಿ ಏರ್ಪಡಿಸಿದ ಸರಕಾರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು
ಈ ಸಂದರ್ಭದಲ್ಲಿ ಶಾಸಕರದ ಹಂಪನಗೌಡ ಬಾದರ್ಲಿ, ಬಸನಗೌಡ ತುರವಿಹಾಳ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ ವಸಂತ್ ಕುಮಾರ್, ಖಾಜಾ ಮಲಿಕ್ ಮತ್ತು ಮಹಿಳಾ ಪದಾಧಿಕಾರಿಗಳ ಶ್ರುತಿ ನಾಗರಾಜ್, ಗದ್ಯಮ್ಮ, ಅನಿತಾ ಇನ್ನು ಇತರರು ಭಾಗಿಯಾಗಿದ್ದರು
ರಿಪೋರ್ಟರ್ : ಮೆಹಬೂಬ ಮೊಮೀನ.