Gadag : ಅಂಧ ಅನಾಥ ವಿದ್ಯಾರ್ಥಿಗಳ ಜೊತೆಗೆ ಕಲ್ಲಯ್ಯಜ್ಜನವರು ಜಿಲ್ಲಾಧಿಕಾರಿಗಳಿಗೆ ಮನವಿ


ಅಂಧ ಅನಾಥ ವಿದ್ಯಾರ್ಥಿಗಳ ಜೊತೆಗೆ  ಕಲ್ಲಯ್ಯಜ್ಜನವರು  ಜಿಲ್ಲಾಧಿಕಾರಿಗಳಿಗೆ ಮನವಿ 

ಗದಗ ನಗರದ ಶ್ರೀ ವೀರೇಶ್ವರ ಪುಣ್ಯಶ್ರಮದಲ್ಲಿ  ಸಂಗೀತ ಕಲಿಯುವ ವಿದ್ಯಾರ್ಥಿಗಳ ಪರೀಕ್ಷೆ ಕೇಂದ್ರವನ್ನು ಏಕಾಏಕಿ ಹುಬ್ಬಳ್ಳಿಗೆ  ಸ್ಥಳಾಂತರ  ಮಾಡಿರುವುದನ್ನು    ವಿರೋಧಿಸಿ ವೀರೇಶ್ವರ ಪುಣ್ಯ ಆಶ್ರಮ  ಮಠದ ಪೂಜ್ಯ ಶ್ರೀ ಕಲ್ಲಯ್ಯಜ್ಜನವರು ರಾಜ್ಯ  ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ನೂರಾರು ಅಂದ ಅನಾಥ  ವಿದ್ಯಾರ್ಥಿಗಳು ಹುಬ್ಬಳ್ಳಿಗೆ ಹೋಗಿ ಹೇಗೆ ಪರೀಕ್ಷೆ ಬರೆಯಬೇಕು ಅಲ್ಲದೆ ಸಂಗೀತ ವಾದ್ಯಗಳನ್ನು  ತೆಗೆದುಕೊಂಡು ಹೋಗಿ ಪರೀಕ್ಷೆ ಬರೆಯುವುದು ತೊಂದರೆ ಆಗುತ್ತದೆ. ಹೀಗಾಗಿ ಪೂಜ್ಯಶ್ರೀ ಕಲ್ಲಯ್ಯಜ್ಜನವರು ಪುಟ್ಟರಾಜ ಗವಾಯಿಗಳ ಸರ್ಕಲ್ ನಿಂದ ಜಿಲ್ಲಾಧಿಕಾರಿಗಳ  ಕಚೇರಿ ವರೆಗೆ ಪ್ರತಿಭಟನೆಯನ್ನು ನಡೆಸಿದರು.

 ಅಪಾರ ವಿದ್ಯಾರ್ಥಿಗಳೊಂದಿಗೆ ತಾವು ಕೂಡ ಕಾಲ್ನಡಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಕಲ್ಲಯ್ಯ ಜನವರು. ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಸಂಬಂಧಿಸಿ ದ ಇಲಾಖೆಗಳಿಗೆ ಮನವಿ ಸಲ್ಲಿಸಿದರು.

 ವರದಿ: ವೀರೇಶ್ ಗುಗ್ಗರಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">