ಕುರುಗೋಡು(ವರದಿ : ಅಣ್ಣಯ್ಯ ಸ್ವಾಮಿ,ಸಿದ್ದಿ ಟಿವಿ) : ಬಯಲಾಟ, ನಾಟಕ ಮುಂತಾದ ಕಲೆಗಳು ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗದಂತಿದ್ದವು. ಆದರೆ, ಬದಲಾದ ಕಾಲ ಘಟ್ಟದಲ್ಲಿ ಅವಸಾನದ ಅಂಚಿನಲ್ಲಿರುವ ಈ ಬಯಲಾಟ, ದೊಡ್ಡಾಟ, ತೊಗುಲುಗೊಂಬೆ ಆಟ ಮುಂತಾದ ಕಲೆಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯ ಇದೆ ಶಾಸಕ ಜೆ ಎನ್ ಗಣೇಶ ಹೇಳಿದರು.
ಇಲ್ಲಿಗೆ ಸಮೀಪದ ಮುಷ್ಠಗಟ್ಟೆ ಗ್ರಾಮದಲ್ಲಿ ಬುಧವಾರ ನಡೆದ ವೀರ ಅಭಿಮನ್ಯು ಕಳಗ ಪೌರಾಣಿಕ ಬಯಲಾಟದಲ್ಲಿ ವೇಳೆ ಪಾಲ್ಗೊಂಡು ಅವರು ಮಾತನಾಡಿದರು.ಬಯಲಾಟ ನಮ್ಮ ಸಂಸ್ಕೃತಿಯ ಹಿರಿಮೆಯಾಗಿದ್ದು, ಈ ಕಲೆ ಮುಂದಿನ ಪೀಳಿಗೆಗೂ ಪರಿಚಯವಾಗಬೇಕು, ಪೌರಾಣಿಕ ಕಥೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಬಯಲಾಟ ರಚನೆಯಾಗಿರುತ್ತದೆ. ಪೌರಾಣಿಕ ಪಾತ್ರಗಳನ್ನು ಸಾಮಾನ್ಯ ಜನಜೀವನಕ್ಕೆ ಸರಿಹೊಂದುವಂತೆ ಬಯಲಾಟದಲ್ಲಿ ಬಿಂಬಿಸಲಾಗುತ್ತದೆ. ಹಿಂದೆ ಗ್ರಾಮೀಣ ಭಾಗದ ಅನಕ್ಷರಸ್ಥರೂ ಬಯಲಾಟಗಳಲ್ಲಿ ಪಾತ್ರ ನಿರ್ವಹಿಸುತ್ತಿದ್ದರು. ಬಯಲಾಟಗಳಿಗೆ ಆಧುನಿಕತೆಯ ಮೆರುಗು ನೀಡಿದರೆ ಇನ್ನಷ್ಟು ಸುಂದರವಾಗುತ್ತವೆ. ಹೊಸ ಪ್ರಯೋಗಗಳಾಗಬೇಕು. ಈ ನಿಟ್ಟಿನಲ್ಲಿ ಯುವ ಕಲಾವಿದರು ಮುಂದೆ ಬರಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಊರಿನ ಮುಖಂಡರು ಬಯಲಾಟದ ವ್ಯವಸ್ಥಾಪಕರು, ಮುಷ್ಠಗಟ್ಟೆ ಗ್ರಾಮಸ್ಥರು ಉಪಸ್ಥಿತರಿದ್ದರು.