Sirigeri : 50 ವರ್ಷಗಳ ಬಳಿಕ ಸಿರಿಗೇರಿ ಸಹಕಾರಿ ಸಂಘದಲ್ಲಿ ಚುನಾವಣಾ ಕಾವು: ಫಲಿತಾಂಶ ಮದ್ಯರಾತ್ರಿ ಪ್ರಕಟ!

ಐವತ್ತು ವರ್ಷಗಳ ಬಳಿಕ ಸಿರಿಗೇರಿ ಸಹಕಾರಿ ಸಂಘದಲ್ಲಿ ಚುನಾವಣಾ ಕಾವು: ಫಲಿತಾಂಶ ಮದ್ಯರಾತ್ರಿ ಪ್ರಕಟ!

(ಅಣ್ಣಯ್ಯ ಸ್ವಾಮಿ, ಸಿದ್ದಿ ಟಿವಿ, ಕುರುಗೋಡು) ಸಿರಿಗೇರಿ: ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯು ಈ ಬಾರಿ ಐವತ್ತು ವರ್ಷಗಳ ಬಳಿಕ ಸ್ಪರ್ಧಾತ್ಮಕವಾಗಿ ನಡೆಯಿತು. ಹಿಂದೆ ಯಾವಾಗಲೂ ಅವಿರೋಧ ಆಯ್ಕೆಯಾಗುತ್ತಿದ್ದ ಈ ಚುನಾವಣೆ, ಈ ಬಾರಿ ಜಿದ್ದಾಜಿದ್ದಿನಿಂದ ಭರಿತವಾಗಿದ್ದು ವಿಧಾನಸಭೆ ಮಟ್ಟದ ಕಾವು ಕಂಡಿತು. ಶುಕ್ರವಾರ ರಾತ್ರಿ 11 ಗಂಟೆಗೆ ಫಲಿತಾಂಶ ಪ್ರಕಟವಾಯಿತು.ಚುನಾವಣಾ ಅಧಿಕಾರಿ ಜಿ.ಎಸ್. ಸುಧೀಂದ್ರ ಅವರು ಫಲಿತಾಂಶ ಪ್ರಕಟಿಸಿದರು. ವಿವಿಧ ಹುದ್ದೆಗಳ ಫಲಿತಾಂಶ ಹೀಗಿದೆ: ಸಿರಿಗೇರಿ ಚುನಾವಣೆ ಫಲಿತಾಂಶ

🗳️ ಸಿರಿಗೇರಿ ಸಹಕಾರಿ ಸಂಘ – ಚುನಾವಣಾ ಫಲಿತಾಂಶ

ಸಾಮಾನ್ಯ ಕ್ಷೇತ್ರ (ಸಾಲಗಾರ)

ಡಿ. ಚನ್ನಪ್ಪ

213 ಮತಗಳು

ಬಿ. ಸೋಮಶೇಖರಪ್ಪ

211 ಮತಗಳು

ಎಸ್.ಎಂ. ನಾಗರಾಜಸ್ವಾಮಿ

205 ಮತಗಳು

ಸುಗ್ನಳ್ಳಿ ರುದ್ರಪ್ಪ

202 ಮತಗಳು

ಬಿ. ವೀರೇಶ್

169 ಮತಗಳು

ಹಿಂದುಳಿದ ವರ್ಗ (ಎ)

ಗರ್ಜಲಿಂಗಪ್ಪ

213 ಮತಗಳು

ಹಿಂದುಳಿದ ವರ್ಗ (ಬಿ)

ಹಾಗಲೂರು ಮಲ್ಲನಗೌಡ

239 ಮತಗಳು

ಪರಿಶಿಷ್ಟ ಜಾತಿ

ಭಜಂತ್ರಿ ರಮೇಶ್

177 ಮತಗಳು

ಪರಿಶಿಷ್ಟ ಪಂಗಡ

ಬಿ. ಮಲ್ಲಯ್ಯ ನಾಯಕ್

192 ಮತಗಳು

ಮಹಿಳಾ ಕ್ಷೇತ್ರ

ಜಿ. ಗೌರಮ್ಮ

213 ಮತಗಳು

ಐ. ಜಲಜಾಕ್ಷಮ್ಮ

193 ಮತಗಳು

ಸಾಮಾನ್ಯ (ಸಾಲಗಾರರಲ್ಲದ) ಕ್ಷೇತ್ರ

ಕೆ. ಶಿವಪ್ಪ

91 ಮತಗಳು

href="https://blogger.googleusercontent.com/img/b/R29vZ2xl/AVvXsEhaeSA7NDLU0OMrAkeqSXdEFIGx4sFvsBuGjFXpaUB6wbYvJd6ZRSacmHf1BmR6rU35SO_lLCe2b5rGGQpxcCRpT2F7TJ72dtsGNJYKeTTPlZjpKGj1DKGTeZXUS5BXf-30u8Tf7kiOEH5GSxxXO-OvpjxZBvowU0qJmoHvm_a6NPb1_SuFdbC_cS84uMrD/s1280/1000523937.jpg" style="display: block; padding: 1em 0px; text-align: justify;">
ಹೀಗಾಗಿ ಒಟ್ಟು 13 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ವಿಡಿಯೋ ನೋಡಲು ಕ್ಲಿಕ್ ಮಾಡಿ

ಈ ಸಂದರ್ಭದಲ್ಲಿ ವಿಜೇತ ಪ್ಯಾನಲ್‌ನ ಪ್ರಮುಖರಾಗಿರುವ ಹಾಗಲೂರು ಮಲ್ಲನಗೌಡ ಅವರು ಮಾತನಾಡಿ:> "ಈ ಬಾರಿ ಗ್ರಾಮದಲ್ಲಿ ಸ್ಪರ್ಧಾತ್ಮಕ ಚುನಾವಣೆ ನಡೆದರೂ, ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ತಂಡಗಳು ಒಗ್ಗಟ್ಟು ತೋರುತ್ತಾ ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಿ, ಮತದಾರರ ಆಶೀರ್ವಾದದಿಂದ ವಿಜೇತರಾಗಿದ್ದೇವೆ. ಗ್ರಾಮ ಸಹಕಾರ ಸಂಘದ ಅಭಿವೃದ್ಧಿಗೆ ರೈತರ ಸಲಹೆ, ಮಾರ್ಗದರ್ಶನಗಳನ್ನು ಗೌರವಿಸಿ ಕೆಲಸ ಮಾಡಲಾಗುವುದು," ಎಂದು ಹೇಳಿದರು.ಚುನಾವಣಾ ಫಲಿತಾಂಶದ ನಂತರ ವಿಜೇತರಾದ ಅಭ್ಯರ್ಥಿಗಳು ಹಾಗೂ ಎಲ್ಲಾ ಪಕ್ಷಗಳ ಹಿರಿಯರು, ಕಾರ್ಯಕರ್ತರು ಸೇರಿ ವಿಜಯೋತ್ಸವ ಆಚರಿಸಿದರು. ಗ್ರಾಮದ ಶ್ರೀ ನಾಗನಾಥೇಶ್ವರ ಹಾಗೂ ಶ್ರೀ ಶಂಭುಲಿಂಗೇಶ್ವರ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪಟಾಕಿ ಸಿಡಿಸಿ, ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಸಂಭ್ರಮಾಚರಣೆ ಮಾಡಲಾಯಿತು. ಸಿಎಂ ನಾಗರಾಜಸ್ವಾಮಿ, ಬಿ. ವೀರಭದ್ರಗೌಡ, ಬಕಾಟೆ ಈರಯ್ಯ, ಬಿ. ಕುಮಾರಪ್ಪ, ಎಸ್.ಎನ್. ವಿರುಪಾಕ್ಷಿ ಗೌಡ, ಬಿ. ನಾಗೇಂದ್ರ ಹಾಗೂ ಗ್ರಾಮದ ಅನೇಕ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು.
Previous Post Next Post

Contact Form

f="https://unpkg.com/video.js/dist/video-js.css" rel="stylesheet">