ಬೆಳಗಾವಿ ಬ್ರೇಕಿಂಗ್
ತನ್ನ ನೆಚ್ಚಿನ ನಾಯಕ ಜಯಗಳಿಸಬೇಕೆಂದು ಸುಮಾರು 70 ಕಿಲೋಮೀಟರ್ ಉರುಳು ಸೇವೆ ಮಾಡಿದ ಅಪ್ಪಟ ಅಭಿಮಾನಿ
ಅರಬಾವಿ ಮತಕ್ಷೇತ್ರದ ಶಾಸಕ ಸಾಹುಕಾರ ಬಾಲಚಂದ್ರ ಜಾರಕಿಹೊಳಿ ಮತ್ತೆ ಕ್ಷೇತ್ರದ ಜನರ MLA ಆಗಿ ಆರಿಸಿ ಬರಬೇಕೆಂದು ಉರುಳು ಸೇವೆ ಸಲ್ಲಿಸಿದ್ದಾರೆ
ಬಳೋಬಾಳದ ಶಿವಲಿಂಗ ಮೆಗಾಡಿ ಎಂಬ ಅಭಿಮಾನಿ ಬಾಗಲಕೋಟ ಜಿಲ್ಲೆಯ ಮಹಾಲಿಂಗಾಪುರದ ಮಹಾಲಿಂಗೇಶ್ವರ ಮಠದಿಂದ ಬೆಳಗಾವಿ ಜಿಲ್ಲೆಯ ಗೋಕಾಕ ಲಕ್ಷೀದೇವಿ ದೇವಸ್ಥಾನದ ವರೆಗೂ ಸೇವೆ ಸಲ್ಲಿಸಿರುವ ಘಟನೆ ನಡೆದಿದೆ
ದಿನಾಂಕ 12 -5-2023 ರಂದು ರಂದು ಸಾಯಂಕಾಲ 5ಗಂಟೆಗೆ ಪ್ರಾರಂಭವಾಗಿ ರಾತ್ರಿ 12 ಗಂಟೆಗೆ ಮೂಡಲಗಿ ಹತ್ತಿರ ಗುರ್ಲಪುರಕ್ಕೆ ಬಂದಿತ್ತು
ಹೀಗೆ ರಾತ್ರಿ ಪೂರ್ತಿ ಉರುಳು ಮಾಡುತ್ತ ದಿನಾಂಕ 13 ಕ್ಕೆ ಗೋಕಾಕ್ ಲಕ್ಷೀದೇವರ ದೇವಸ್ಥಾನಕ್ಕೆ ತೆರಳಿ ಆಶೀರ್ವಾದ ಪಡೆದು ಉರುಳು ಸೇವೆ ನಿಲ್ಲಿಸಿದ್ದಾರೆ
ವರದಿ : ಎಂ. ಕೆ. ಸಪ್ತಸಾಗರ

