ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸದಾಬದ್ಧ : ಶಾಸಕ ಕೆ.ರಾಘವೇಂದ್ರ ಹಿಟ್ನಾಳ
ಕೊಪ್ಪಳ,: ಚುನಾವಣೆಯಲ್ಲಿ ಕ್ಷೇತ್ರದ ಜನತೆಗೆ ನೀಡಿದ ಆಶ್ವಾಸನೆಯನ್ನು ಪ್ರಮಾಣಿಕವಾಗಿ ಈಡೇರಿಸುವ ಮೂಲಕ ಕೊಪ್ಪಳ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ನಿರ್ಮಾಣ ಮಾಡುವೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಭರವಸೆ ನೀಡಿದರು. ಮಂಗಳವಾರ ತಾಲೂಕಿನ ಭಾಗ್ಯನಗರ ಪಟ್ಟಣದ ಗಂಗಮ್ಮ ಲಕ್ಷ್ಮಣಸಾ ಖೋಡೆ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಶಾಸಕರಿಗೆ ಸನ್ಮಾನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ, ಕೊಪ್ಪಳ ನಗರದಲ್ಲಿ 168 ಕೋಟಿ ರೂ. ವೆಚ್ಚದಲ್ಲಿ 450 ಬೆಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಪ್ರಗತಿ ಹಂತದಲ್ಲಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಅಗತ್ಯವಿರುವ ಪೀಠೋಪಕರಣಗಳು, ವೈದ್ಯರು, ಸಿಬ್ಬಂದಿ ಹಾಗೂ ಸೌಲಭ್ಯ ನೀಡಲು ಸರಕಾರ ಮಟ್ಟದಲ್ಲಿ ತೀರ್ಮಾನಿಸಿ ಶೀಘ್ರವೇ ಪ್ರಾರಂಭಿಸಲಾಗುವುದು.
ಅಲ್ಲದೇ ಕ್ಷೇತ್ರದ ಜನರ ಆರೋಗ್ಯದ ಹಿತದೃಷ್ಟಿಯಿಂದ ಮಲ್ಟಿ ಆಸ್ಪತ್ರೆಯನ್ನು 1000 ಹಾಸಿಗೆಗೆ ಹೆಚ್ಚಿಸಲಾಗುವುದು ಎಂದರು. ಕ್ಷೇತ್ರದಲ್ಲಿ ಸಿಂಗಟಾಲೂರು, ಅಳವಂಡಿ-ಬೆಟಗೇರಿ, ಬಹದ್ದೂರಬಂಡಿ ಸೇರಿದಂತೆ ಅಪೂರ್ಣಗೊಂಡಿರುವ ಏತ ನೀರಾವರಿ ಯೀಜನೆಗಳನ್ನು ಜಾರಿಗೊಳಿಸಿ, ರೈತರಿಗೆ ವರವಾಗುವ ನಿಟ್ಟಿನಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ನೀರಾವರಿ ಯೋಜನೆಗೆ ನಯಾಪೈಸೆ ಅನುದಾನ ನೀಡದೇ ತಾರತಮ್ಯ ಮಾಡಿದರು. ಇದರಿಂದ ನೀರಾವರಿ ಯೋಜನೆಗಳು ಕುಂಠಿತಗೊಂಡಿತು. ಹೀಗಾಗಿ ಈ ಬಾರಿಯ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕ್ಷೇತ್ರದ ಎಲ್ಲ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ, ರೈತರ ಜಮೀನಿಗೆ ನೀರು ಹರಿಸುತ್ತೇನೆ ಎಂದರು. ಭಾಗ್ಯನಗರ ಪಟ್ಟಣಕ್ಕೆ ಸಂಪರ್ಕವಾಗಿ ಮೇಲ್ಸೆತುವೆಯಾಗಿದೆ. ಬರುವ ದಿನಗಳಲ್ಲಿ ಸಿಸಿರಸ್ತೆ, ಚರಂಡಿ ನಿರ್ಮಾಣ ಮಾಡಲಾಗುವುದು. ಫಾರ್ಮ್ ನಂ-3 ಸಂಬಂಧಿಸಿದಂತೆ ತ್ವರಿತಗತಿಯಲ್ಲಿ ಪ್ರತಿಯೊಬ್ಬರಿಗೂ ಕೊಡಿಸುವ ಕೆಲಸ ನಿಶ್ಚಿತವಾಗಿ ಮಾಡುತ್ತೇವೆ. ನಗರಕ್ಕೆ ವಿಮಾನ ನಿಲ್ದಾಣಕ್ಕಾಗಿ, ನ್ಯಾಯಾಲಯ ಸಂಕೀರ್ಣಕ್ಕಾಗಿ ಬಿಜೆಪಿ ಸರಕಾರ ಜಾಗ ಕೊಡಿಸುವ ಕೆಲಸ ಮಾಡಲಿಲ್ಲ. ಈಗ ನಮ್ಮ ಸರಕಾರ ರಚನೆಯಾಗಿದ್ದು, ನಗರಾಭಿವೃದ್ಧಿಗಾಗಿ ಡಿಪಿಆರ್ ಮಾಡಿಸಿ 168 ಕೋಟಿ ರೂ. ವೆಚ್ಚದಲ್ಲಿ ಭಾಗ್ಯನಗರ ಹಾಗೂ ಕೊಪ್ಪಳ ನಗರಕ್ಕೆ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು. ಯುವಕರ ಬೇಡಿಕೆಯಂತೆ ಇ-ಲೈಬ್ರರಿ, ಇಂಟರ್ ನ್ಯಾಷನಲ್ ಶಾಲೆ ನಿರ್ಮಾಣಕ್ಕೆ ಕ್ರಮ ಕೈಗೊಂಡು, ಹೆಚ್ಚು ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಲಾಗುವುದು ಎಂದರು. ಈ ಸಂಧರ್ಭದಲ್ಲಿ ಮಾಜಿ ಜಿಪಂ ಅಧ್ಯಕ್ಷ ಎಸ್.ಬಿ. ನಾಗರಳ್ಳಿ,ಮುಖಂಡರಾದ ಆಸೀಫ್ ಅಲಿ, ಜುಲ್ಲು ಖಾದ್ರಿ, ಗೂಳಪ್ಪ ಹಲಿಗೇರಿ, ಕಾಟನ್ ಪಾಷಾ, ಕೃಷ್ಣ ರಡ್ಡಿ, ಶ್ರೀನಿವಾಸ್ ಗುಪ್ತಾ, ರಾಘವೇಂದ್ರ ಫಾನಘಂಟಿ, ಶಿವರೆಡ್ಡಿ ಭೂಮಕ್ಕನವರ, ಯಮನೂರಪ್ಪ ಕಬ್ಬೆರ್, ಸರಸ್ವತಿ ಇಟ್ಟಂಗಿ, ದಾನಪ್ಪ ಕಾವಲೂರು, ತುಕಾರಾಮಪ್ಪ, ಎನ್. ಮೇಘರಾಜ, ಹೊನ್ನೂರಸಾಬ್, ಚನ್ನಪ್ಪ ತಟ್ಟಿ, ರಮೇಶ್ ಹ್ಯಾಟಿ, ಇಬ್ರಾಹಿಂ, ಮಂಜುನಾಥ ಸಾಲಿಮಠ, ಜ್ಯೋತಿ ಗೊಂಡಬಾಳ, ಸವಿತ ಗೊರಂಟ್ಲಿ, ಬಸಯ್ಯ ಹಿರೇಮಠ, ಅಕ್ಬರ್ ಪಲ್ಟಾನ್ ಸೇರಿದಂತೆ ಅನೇಕರು ಇದ್ದರು.