ಕಂಪ್ಲಿ : ಜನರಿಗೆ ಫಾರಂ ನಂಬರ್ 3 ನೀಡುವಲ್ಲಿ ವಿಳಂಬ-Siddi TV


ಜನರಿಗೆ ಫಾರಂ ನಂಬರ್ 3 ನೀಡುವಲ್ಲಿ ವಿಳಂಬವಾದರೆ ಪುರಸಭೆ ಮುತ್ತಿಗೆ ಹಾಕಲಾಗುವುದು ಎಂದು ಕಂಪ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ( ಪಕ್ಷಾತೀತ ) ಅಧ್ಯಕ್ಷರಾದ ಜಿ.ಜಿ.ಚಂದ್ರಣ್ಣ ತಿಳಿಸಿದರು.

 ಪಟ್ಟಣದ ಪುರಸಭೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಾರಂ ನಂಬರ್ 3, ಮೋಟೆಶನ್, ತಿದ್ದು ಪಡಿ ಸೇರಿದಂತೆ ಇತರೆ ಕೆಲಸ ಕಾರ್ಯಕ್ಕಾಗಿ ಸಾರ್ವಜನಿಕರು ಪುರಸಭೆಗೆ ತೆರಳಿದಾಗ ನಿಗದಿತ ಸಮಯಕ್ಕೆ ಅವರ ಕೆಲಸವನ್ನು ಮಾಡಿಕೊಡದೆ ಸುಖ ಸುಮ್ಮನೆ  ಓಡಾಡಿಸಿ ಸಾರ್ವಜನಿಕರಿಗೆ ತೊಂದರೆ ಮಾಡುವಂತಹ ಕೆಲಸವನ್ನು ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾಡುತ್ತಿದ್ದಾರೆ.  ಹಣ ನೀಡಿದವರಿಗೆ ದಾಖಲಾತಿಗಳು ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸದೆ 5 ದಿನಗಳ ಒಳಗಾಗಿಯೇ ಫಾರಂ ನಂಬರ್ 3 ನೀಡುವಂತಹ  ಕೆಲಸವಾಗುತ್ತಿದೆ. ಫಾರಂ ನಂಬರ್ 3 ಹಾಗೂ ಮೋಟೇಶನ್ ಗಾಗಿ  ಬಡ ಹಾಗೂ ಮಾಧ್ಯಮ ವರ್ಗದ ಎಷ್ಟೋ ಜನರು ಅರ್ಜಿ ಸಲ್ಲಿಸಿ 2/3 ತಿಂಗಳು ಕಳೆದರೂ ಅವರ ಕೆಲಸಗಳಾಗದಿರುವುದು ದುರಂತವೇ ಸರಿ. ಈ ಕುರಿತು ಸಂಬಂಧ ಪಟ್ಟಂತಹ ಮೇಲಾಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಮುಂದಾಗಬೇಕು. ಒಂದು ವೇಳೆ ವಿಳಂಬವಾದಲ್ಲಿ  ಅಥವಾ ಹಣದ ಬೇಡಿಕೆ ಇಟ್ಟಲ್ಲಿ ಪುರಸಭೆಗೆ ಮುತ್ತಿಗೆ ಹಾಕಿ  ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಆಕ್ರೋಶ ಹೊರಹಾಕಿದರು.ಇನ್ನು ಇಲ್ಲಿನ ಅಂಬೇಡ್ಕರ್ ವೃತ್ತದ ಬಳಿ ಬಸ್ ತಗ್ಗುದಾದ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು,  ವಯೋ ವೃದ್ಧರು, ಗರ್ಭಿಣಿಯರು, ಮಹಿಳೆಯರು ಹಾಗೂ ಅಂಗವಿಕಲರು  ಬಿಸಿಲಿನಲ್ಲಿ ನಿಂತೆ ಬಸ್ ಗಾಗಿ ಕಾಯುವಂತಹ ಪರಿಸ್ಥಿತಿ ಇದೆ. ಈ ಕುರಿತು ಪುರಸಭೆಗೆ ಅನೇಕ ಬಾರಿ ಮನವಿ ಸಲ್ಲಿಸಿದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಈಗಲಾದರೂ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಬಸ್ ತಗ್ಗುದಾದ ನಿರ್ಮಿಸಬೇಕು. ಅಥವಾ ಬಸ್ ತಂಗುದಾಣ ನಿರ್ಮಿಸಲು ಅನುಮತಿಯನ್ನಾದರೂ ನೀಡಬೇಕು ಎಂದು ಒತ್ತಾಯಿಸಿದರು.

 ಈ ಸಂದರ್ಭದಲ್ಲಿ ಮುಖಂಡರಾದ ಕರೆಕಲ್ ಮನೋಹರ್, ಬಿ.ನಾಗೇಂದ್ರ, ವಿ.ವೆಂಕಟರಮಣ, ಹನುಮಂತ, ಬಿ.ಕೆ.ವಿರೂಪಾಕ್ಷಿ, ಭಾವೈಕ್ಯ ವೆಂಕಟೇಶ್, ಬಾವಿಕಟ್ಟೆಯ ವೆಂಕಟೇಶ್ ಸೇರಿದಂತೆ ಇತರರಿದ್ದರು.

Watch Video Byte : 



Previous Post Next Post

Contact Form

f="https://unpkg.com/video.js/dist/video-js.css" rel="stylesheet">