ಹತ್ತನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭ
ಕಂಪ್ಲಿ :
ಕಂಪ್ಲಿಯ ನಿವೇದಿತ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2023-24ನೇ ಸಾಲಿನ ಹತ್ತನೇ ತರಗತಿ ಮಕ್ಕಳ ಬಿಳ್ಕೊಡುಗೆ ಸಮಾರಂಭ ಹಾಗೂ ಸರಸ್ವತಿ ಪೂಜಾ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಶಾಲೆಯ ವ್ಯವಸ್ಥಾಪಕ ಕೆ ರಾಮು ಮಾತನಾಡಿ, ಮಕ್ಕಳಿಗೆ ಹತ್ತನೇ ತರಗತಿಯ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಕೆಲವು ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಗುರುಗಳು ಹೆಚ್ ಮರಿಯಪ್ಪ ಮಾತನಾಡಿ ನಮ್ಮ ಶಾಲೆಯಲ್ಲಿ ಸತತವಾಗಿ ಆರನೇ ವರ್ಷ ನೂರಕ್ಕೆ ನೂರು ಫಲಿತಾಂಶ ಪಡೆದಿದ್ದೇವೆ. ಅದೇ ರೀತಿಯಾಗಿ ಈ ವರ್ಷವೂ ಸಹ ಅದೇ ರೀತಿಯ ಫಲಿತಾಂಶವನ್ನು ಪಡೆಯುವ ವಿಶ್ವಾಸವಿದೆ. ಮಕ್ಕಳಿಗೆ ಮೌಲ್ಯದ ಶಿಕ್ಷಣ ಬಹಳ ಮುಖ್ಯವಾಗಿದೆ ವಿದ್ಯಾಭ್ಯಾಸಕ್ಕೆ ತಂದೆ-ತಾಯಿಯ ಹಾಗೂ ಶಿಕ್ಷಕರ ಸಹಕಾರ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ಈ ಸಮಯದಲ್ಲಿ 2022-23ನೇ ಸಾಲಿನ ಅತಿ ಹೆಚ್ಚು ಅಂಕ ಪಡೆದ ರಮೇಶ್ ಟಿ 582/625 ಶೇಕಡಾ 93.12% ಅಂಕವನ್ನು ಪಡೆದ ವಿದ್ಯಾರ್ಥಿಗೆ ಸನ್ಮಾನಿಸಿ ಶಾಲಾ ವತಿಯಿಂದ ಕಿರು ಕಾಣಿಕೆ ನೀಡಲಾಯಿತು.
ಈ ಸಮಯದಲ್ಲಿ ಮಾತನಾಡಿದ ಟಿ.ರಮೇಶ್ ನಿವೇದಿತ ಶಾಲೆಯು ನಮಗೆ ಮೌಲ್ಯ ಶಿಕ್ಷಣವನ್ನು ನೀಡಿದೆ ಇಲ್ಲೆಲ್ಲಾ ಶಿಕ್ಷಕರು. ಶಿಕ್ಷಕಿಯರು ಆಡಳಿತ ಮಂಡಳಿಯವರು ಒಂದು ಕುಟುಂಬದಂತೆ ನಮ್ಮನ್ನು ನೋಡಿಕೊಂಡು ಒಳ್ಳೆಯ ವಿದ್ಯಾಭ್ಯಾಸವನ್ನು ಕೊಟ್ಟಿದ್ದಾರೆ ಆದ್ದರಿಂದ ನನಗೆ ಈ ಒಂದು ಫಲಿತಾಂಶ ಪಡೆಯಲು ಸಾಧ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಮಾತಾ ಮೊಂಟಸರಿ ವಿದ್ಯಾ ಸಂಸ್ಥೆ (ರಿ) ನಿವೇದಿತ ಆಂಗ್ಲ ಮಾಧ್ಯಮ ಶಾಲೆ ಕಂಪ್ಲಿಯ ಅಧ್ಯಕ್ಷರಾದ ಹೆಚ್ ಮರಿಯಪ್ಪ, ಕಾರ್ಯದರ್ಶಿಗಳಾದ ಕೆ ರಾಮು, ಉಪಾಧ್ಯಕ್ಷರಾದ ಬಸವರಾಜ್ ಹಾಗೂ ಮುಖ್ಯ ಶಿಕ್ಷಕಿಯಾದ ಎಂ. ಪುಷ್ಪ ಮತ್ತು ಶಿಕ್ಷಕ/ ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.
ಸಿದ್ದಿ ಟಿವಿ, ಕಂಪ್ಲಿ : 6360633266