JCI ಕಂಪ್ಲಿ ಸೋನಾ ವತಿಯಿಂದ ರಾಷ್ಟ್ರೀಯ ತರಬೇತಿ ದಿನಾಚರಣೆ ಯಶಸ್ವಿ
ಕಂಪ್ಲಿ.ಮೇ.27:ಪ್ರತಿ ಮನುಷ್ಯನಿಗೆ ಉತ್ತಮ ಜೀವನ ನಿರ್ವಹಣೆಯೊಂದಿಗೆ ಉನ್ನತ ಸಾಧನೆಗೆ ವಿವಿಧ ಹಂತಗಳ ತರಬೇತಿ ಅವಶ್ಯಕವಾಗಿದೆ ಎಂದು ಜೆಸಿಐನ ವಲಯ ತರಬೇತುದಾರ ಮೊಹಮ್ಮದ ವಾಸೀಮ್ ಫಯಾಜ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೆಸಿಐ ಕಂಪ್ಲಿ ಸೋನಾ ಘಟಕದ ವತಿಯಿಂದ ಏರ್ಪಡಿಸಿದ್ದ ಜೆಸಿಐ ಭಾರತ ರಾಷ್ಟ್ರೀಯ ತರಬೇತಿ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಉನ್ನತ ಸಾಧನೆಗೆ ಉತ್ತಮ ಗುರಿ ಮಾರ್ಗದರ್ಶನ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜೆಸಿಐ ವತಿಯಿಂದ ವಿದ್ಯಾರ್ಥಿಗಳಿಗೆ,ಉದ್ಯಮಿಗಳಿಗೆ, ಯುವಕರಿಗೆ,ಮಹಿಳೆಯರಿಗೆ ಸೇರಿದಂತೆ ವಿವಿಧ ರಂಗ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಹಂತ ಹಂತವಾಗಿ ನಿರಂತರ ತರಬೇತಿ ಆಯೋಜಿಸುವ ಮೂಲಕ ಸದೃಢ ರಾಷ್ಟ್ರನಿರ್ಮಾಣಕ್ಕೆ ಮುಂದಾಗುತ್ತಿದೆ ಎಂದರು.
ಜೆಸಿಐ ಕಂಪ್ಲಿ ಸೋನಾ ಘಟಕದ ಅಧ್ಯಕ್ಷ ಬಿ.ರಸೂಲ್ ಅಧ್ಯಕ್ಷತೆ ವಹಿಸಿ ಮಾತನಾಡಿ,ವಿದ್ಯಾರ್ಥಿ ಜೀವನದಲ್ಲಿ ಆಸಕ್ತಿಯಿಂದ ಕಲಿಕೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಮಾತ್ರ ಉನ್ನತ ಸಾಧನೆಗೆ ಮುಂದಾಗಲು ಸಾಧ್ಯವಾಗಲಿದೆ. ಆದ್ದರಿಂದ ಜೆಸಿಐ ಸೇರ್ಪಡೆ ಮೂಲಕ ಪದವಿ ವಿದ್ಯಾರ್ಥಿಗಳು ಸಾಮಾಜಿಕ ಚಿಂತನೆಯನ್ನು ಮೈಗೂಡಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಕೈಗೊಳ್ಳಲು ಮುಂದಾಗಬೇಕು ಎಂದರು.
ಈ ವೇಳೆ ಕಾಲೇಜಿನ ಪ್ರಾಂಶುಪಾಲ ಎಂ.ಪಿ.ಬಾಲಾಜಿ ಮಾತನಾಡಿ ಎಲ್ಲಾ ಹಂತದಲ್ಲೂ ತರಬೇತಿ ಪಡೆದರೆ ವಿದ್ಯಾರ್ಥಿಗಳಿಗೆ ಉನ್ನತ ಸಾಧನೆಗೆ ಉತ್ತಮವಾಗುತ್ತೆ ಮಾರ್ಗದರ್ಶನದ ಜೊತೆಗೆ ಸಹಕಾರಿಯಾಗಲಿದೆ ಎಂದರು.
ಜೆಸಿಐ ತರಬೇತಿ ಕಾರ್ಯಾಗಾರದಲ್ಲಿ ವಲಯ ತರಬೇತುದಾರ ಮೊಹಮ್ಮದ ವಾಸೀಮ್ ಫಯಾಜ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ಕಂಪ್ಲಿ ಸೋನಾ ಘಟಕದ ಪೂರ್ವಾಧ್ಯಕ್ಷ ಇಂದ್ರಜಿತ್ ಸಿಂಗ್ ಪದಾಧಿಕಾರಿಗಳಾದ ಅಕ್ಕಿಜಿಲಾನ್,ಯೂಸುಫ್,ವೆಂಕಟಸಪ್ತಗಿರಿ,ಅಮರನಾಥ ಶಾಸ್ತ್ರಿ,ಉಪನ್ಯಾಸಕರಾದ ಚಂದ್ರಶೇಖರ,ರಾಜ್ಮಾ,ಕೃಷ್ಣ,ಮಹೇಶ,ಅನ್ನಪೂರ್ಣ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಇತರರು ಪಾಲ್ಗೊಂಡಿದ್ದರು.