Kampli : ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮ : ಪಿಐ ವಾಸುಕುಮಾರ್ ನೇತೃತ್ವ


ಕಂಪ್ಲಿಯಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮ : ಪಿಐ ವಾಸುಕುಮಾರ್ ನೇತೃತ್ವ | ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದ ಕಂಪ್ಲಿ ಪೊಲೀಸರು

ಸಿದ್ದಿ ಟಿವಿ ಕಂಪ್ಲಿ ಜೂನ್ 29: ಕಂಪ್ಲಿ ಪೊಲೀಸ್ ಠಾಣೆಯ ವತಿಯಿಂದ, ಮಾದಕ ವಸ್ತುಗಳ ಬಳಕೆ ಹಾಗೂ ಅದರಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕಂಪ್ಲಿ ಪಟ್ಟಣದಲ್ಲಿ ವಿಶೇಷ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪಿಐ ವಾಸುಕುಮಾರ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪಿಎಸ್‌ಐ ಅವಿನಾಶ್ ಕಾಂಬ್ಳೆ ಹಾಗೂ ಎಎಸ್‌ಐ ಬಸವರಾಜ ಅವರುಗಳು ಉಪಸ್ಥಿತರಿದ್ದರು. ಬಳಿಕ ಪಿಐ ವಾಸುಕುಮಾರ್ ಮಾತನಾಡುತ್ತಾ, “ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಈ ಚಟವು ಮೆದುಳಿನ ಮೇಲೆ ದೀರ್ಘಕಾಲದ ನಷ್ಟವನ್ನುಂಟುಮಾಡುತ್ತದೆ. ಮಾದಕ ದ್ರವ್ಯ ಸೇವನೆಯ ಪರಿಣಾಮವಾಗಿ ಮಾನಸಿಕ ಅಸ್ಥಿರತೆ, ಕ್ಯಾಂಸರ್‌ ಸೇರಿದಂತೆ ಹಲವು ಗಂಭೀರ ಕಾಯಿಲೆಗಳು ಉಂಟಾಗುತ್ತವೆ,” ಎಂದು ತಿಳಿಸಿದರು.

ಅವರು ಮುಂದುವರೆದು, “ಡ್ರಗ್ಸ್ ಎನ್ನುವುದು ಕೇವಲ ತಪ್ಪು ಚಟವಲ್ಲ, ಅದು ನಮ್ಮ ಯುವ ಸಮುದಾಯದ ಭವಿಷ್ಯವನ್ನು ನಾಶ ಮಾಡುವ ಮಾರಕ ಶಕ್ತಿಯಾಗಿದೆ. ಈ ಪೈಪೋಟಿ ಯುಗದಲ್ಲಿ ನವ ತಲೆಮಾರಿಗೆ ಶಿಷ್ಟತೆ ಮತ್ತು ಜವಾಬ್ದಾರಿಯುತ ನಡೆ ಅಗತ್ಯ,” ಎಂದರು.

#SayNoToDrugs #BallariPolice #Kampli #PublicAwareness

Previous Post Next Post

Contact Form

f="https://unpkg.com/video.js/dist/video-js.css" rel="stylesheet">