ಹಿರೇ ಬನ್ನಿಗೊಳ್ ಗ್ರಾಮದಲ್ಲಿ ಮತದಾನದ ಜಾಗೃತಿ ಬೆಳಕು
ಮಹಿಳೆಯರಿಂದ ಜರುಗಿದ ಪಂಜಿನ ಮೆರವಣಿಗೆ
ಜಾಗೃತಿ ಜಾಥಾಕ್ಕೆ ಪಿ ಡಿ ಓ ಚಂದಪ್ಪ ಗುಡಿಮನಿ ಅವರಿಂದ ಚಾಲನೆ
ಕುಷ್ಟಗಿ : ಸೂರ್ಯ ಪಶ್ಚಿಮದಲ್ಲಿ ಸಣ್ಣಗೆ ಜಾರಿ ಕತ್ತಲು ಆವರಿಸುವ ಹೊತ್ತಿಗೆ ಮೂಡಿತು ಮೇಣದ ಬೆಳಕಿನ ಹೊಂಬೆಳಕು!
ಹೌದು, ಇದು ಅಂತಿಂತಹ ಬೆಳಕಲ್ಲ. ನನ್ನ ಮತ, ನನ್ನ ಹಕ್ಕು ಹಾಗೂ ಮತದಾನ ಮಾಡುವವನೇ ಮಹಾಶೂರ ಎಂಬ ಬೆಳಗಿದ ದೀಪಗಳು ! , ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂದು ಮೇಣದ ಬತ್ತಿ ಹಿಡಿದು ಜಾಗೃತಿ ಮೂಡಿಸಿತು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಚಂದಪ್ಪ ಗುಡಿಮನಿ ನೇತೃತ್ವದ ತಂಡವು ಮತದಾನ ಹಕ್ಕಿನ ಬೆಳಕು ಮೂಡಿಸಿತು. ಈ ಬೆಳಕು ಕಂಡು ಬಂದಿದ್ದು, ಕುಷ್ಟಗಿ ತಾಲೂಕಿನ ಹಿರೇಬನ್ನಿ ಗೊಳ್ ಗ್ರಾಮದಲ್ಲಿ ವಿಧಾನಸಭಾ ಚುನಾವಣಾ ಅಂಗವಾಗಿ ಮತದಾನ ಜಾಗೃತಿ ಮೂಡಿಸಲು ಗ್ರಾಮದಲ್ಲಿ ಗ್ರಾಮದ ಮಹಿಳೆಯರಿಂದ ವಿಶೇಷವಾಗಿ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸಲಾಯಿತು. ಮಹಿಳೆಯರು ಮೇಣದ ಬತ್ತಿ ಜಾಗೃತಿ ಜಾಥಾವು ಜಾಗೃತಿ ಗೀತೆಗಳೊಂದಿಗೆ ಹಿರೇ ಬನ್ನಿಗೊಳ್ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ನಡೆದು ಗ್ರಾಮಸ್ಥರನ್ನು ಆಕರ್ಷಿಸಿತು..
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಚಂದಪ್ಪ ಅವರು ಮಾತನಾಡಿ, ಯುವಕರು, ವೃದ್ಧರು, ವಿಕಲಚೇತನ ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಬೇಕು. ಶೇ.100 ರಷ್ಟು ಮತ ಚಲಾಯಿಸಿ ಯೋಗ್ಯ ಹಾಗೂ ಸಮರ್ಥ ನಾಯಕನನ್ನು ಆಯ್ಕೆ ಮಾಡಬೇಕು.
ದೇಶ, ನಾಡು ಕಟ್ಟುವಲ್ಲಿ ಪ್ರತಿಯೊಬ್ಬರ ಮತ ಮುಖ್ಯವಾಗಿರುತ್ತದೆ. ಯಾರೊಬ್ಬರೂ ಮತದಾನ ಮಾಡಲು ನಿಷ್ಕಾಳಜಿ ತೋರಬಾರದು. ಚುನಾವಣೆ ಎಂಬುದು ಪ್ರಜಾತಂತ್ರದ ಹಬ್ಬವಾಗಿದೆ. ಯಾರೂ ಆಸೆ, ಆಮೀಷಕ್ಕೆ ಒಳಗಾಗದೇ ಖುಷಿಯಿಂದ ಮತ ಚಲಾಯಿಸಬೇಕು ಎಂದರು.
ಇದೇ ವೇಳೆ ಗ್ರಾಮಸ್ಥರಿಗೆ ತಾ ಪಂ ಐ ಇ ಸಿ ಸಂಯೋಜಕ ಚಂದ್ರಶೇಖರ್ ಜಿ ಹಿರೇಮಠ್ ಪ್ರತಿಜ್ಞಾ ವಿಧಿ ಬೋಧಿಸಿದರು. ಹಾಗೂ ಈ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಗ್ರಾಮದ ೧೦೦ ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಪಂ ಸಿಬ್ಬಂದಿಗಳಾದ ಯಲ್ಲಪ್ಪ,ಯಮನೂರಪ್ಪ , ಅಲ್ಲಸಾ ಬ್, ಬಸೆಟ್ಟೆಪ್ಪ ,ಗೌರಮ್ಮ,ಎನ್ ಆರ್ ಎಲ್ ಎಂ ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರಾದ ಮಹೇಶ್ವರಿ ಬಸಮ್ಮ,ಶಾಂತ,ಕಸ್ತೂರಿ ಹಾಗೂ ಇತರರು ಅಂಗನವಾಡಿ, ಆಶಾ, ಕಾರ್ಯಕರ್ತೆಯರು ಇದ್ದರು ಐ ಇ ಸಿ ಸಂಯೋಜಕರು ಮತ್ತು ಇನ್ನಿತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶ್ರವಣ್ ಕುಮಾರ್ ಅಂಗಡಿ, ಸಿದ್ದಿ ಟಿವಿ, ಕುಷ್ಟಗಿ
Tags
ರಾಜಕೀಯ